Friday, December 24, 2010

ಅಸಂಗತಗಳಾಚೆ..!

ಹಾಗೂ ಹದಿನಾರನೇ ಮೈಲಿಕಲ್ಲಿನ ಶ್ರೀಯುತರಿಗೆ , ಹೆಂಡತಿಯೊಂದಿಗಿನ ಸುಖದ ಉತ್ಕಟ ಕ್ಷಣಗಳಲ್ಲಿ ಸೊಂಟನೋವು ಕೈ ಕೊಡುತಿತ್ತು..!!
*                     *                       *                   *               *                    *                *            *         *
ಪ್ರೀಯ ಓದುಗರೇ ,
ನೀವು ಯಾವತ್ತಾದರೂ ಶಿರಸಿಯಿಂದ ಸಿದ್ದಾಪುರದ ಕಡೆಗೆ ಅಥವಾ ಸಾಗರದ ಕಡೆಗೆ ಅಥವಾ ಶಿವಮೊಗದ ಕಡೆಗೆ ಪ್ರಯಾಣಿಸಿದ್ದರೆ ,  ಇಲ್ಲವಾದರೆ ಆ ಸ್ಥಳಗಳಿಂದ ಶಿರಸಿಯ ಕಡೆ ಬಂದಿದ್ದರೆ ನೀವು ಹದಿನಾರನೆ ಮೈಲಿಕಲ್ಲು ಎಂಬ ಊರನ್ನು ಹಾಡು ಹೋಗಿರಲೇ ಬೇಕು. ನೀವು ಈ ಕಡೆಯವರಾಗಿರದಿದ್ದರೆ ನಿಮಗೆ ಹದಿನಾರಾಣೆ ಮೈಲಿಕಲ್ಲು ಎಂಬ ವಿಚಿತ್ರ ಹೆಸರಿನ ಊರಾಗಲಿ , ಅಲ್ಲಿನ ಖಾಯಂ ನಿವಾಸಿಯಾದ ಶ್ರೀಯುತರಾಗಲಿ ಪರಿಚಯವಿಲ್ಲದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ಇವತ್ತು ನಾನು ಹೆಳಹೊರತಿರುವ , ಹದಿನಾರಾಣೆ ಮೈಲಿಕಲ್ಲಿನ ಶ್ರೀಯುತರ ಪರಮ ಪ್ರಸಿದ್ಧ (ಕುಪ್ರಸಿದ್ಧ) ಸೊಂಟನೋವಾಗಲಿ , ಆ ಸೊಂಟನೋವಿನ ಸುತ್ತ-ಮುತ್ತ ನಿಗೂಡ ಪಾಶದಂತೆ ಸುತ್ತುವರಿದ ಕಥೆಗಳಾಗಲಿ ಅಥವಾ ತರ್ಕಕ್ಕೆ ನಿಲುಕದಂತಹ ಊಹಾತ್ಮಕ ವಿಶಯಗಳಾಗಲಿ ನಿಮಗೆ ಗೊತ್ತಿರಲಿಕ್ಕೂ ಸಾಕು ಯಾ ಗೊತ್ತಿರದೆ ಇರಲಿಕ್ಕೂ ಸಾಕು.
*                     *                       *                   *               *                    *                *            *         *
ಶ್ರೀಯುತರ ಸೊಂಟನೋವಿನ ವಿಷಯ ನನ್ನ ಮಾರಿಪತ್ತಿನವರೆಗೆ ಬರುವಷ್ಟರಲ್ಲಿ ಅಖಂಡವಾಗಿ ಹದಿನಾರನೇ ಮೈಲಿಕಲ್ಲನ್ನು ಆವರಿಸಿತ್ತು. ನಾನು ನನ್ನ ಯಾವತ್ತಿನ ಅಭ್ಯಾಸದಂತೆ ಸೀಸೀ ಯಲ್ಲಿ ಕುಳಿತು ಟೀ ಕುಡಿಯುತ್ತಿರುವಾಗಲೆ  ಮಿತ್ರನಾದ ನಾಗಪತಿ ಮೆಸೇಜ್ ಮಾಡಿದ್ದ.
" ಶ್ರೀಯುತರಿಗೆ ಸೊಂಟನೋವು ತಾರಕಕ್ಕೆ  ಏರಿದೆ. ನಿನ್ನ ನೋಡಬೇಕು ಅನ್ನುತ್ತಿದ್ದಾರೆ ಕೂಡಲೇ ಹೊರಟು ಬರತಕ್ಕದ್ದು."
ನಾಗಪತಿಯ ಮೆಸೇಜ್ ನೋಡಿ ನಾನು ಗಡಬಡಿಸಿ ಎದ್ದು ಪಕ್ಕದಲ್ಲೇ ನಿಂತಿದ್ದ , ಉದ್ದ ದೇಹದ , ಬಿಗ್ಗಿ ಬಿಗಿ ಬಟ್ಟೆಯ ಜೈನ್ ಕಾಲೇಜಿನ ಕನ್ಯೆಯರ ಕುಡಿ ನೋಟವನ್ನು ಲೆಕ್ಕಿಸದೆ ,  ಗ್ಲಾಸ್‌ನಲ್ಲಿ ಉಳಿದ ಕೊನೆಯ ೩ - ೪ ಗುಟುಕು ಟೀ ಯನ್ನ ಸೊರ್ರನೇ ಕುಡಿದು ಅಲ್ಲೇ ಲೋಟವನ್ನು ಮಗುಚಿ , ತಟ್ಟನೆ ಎದ್ದು ಮೈ ಮುರಿಯಲು ಮನಸ್ಸು ಮಾಡದೇ , ರೂಮ್ಗೆ ಬಂದು , ಇದ್ದುದರಲ್ಲೇ ಸ್ವಚ್ಛವಾಗಿದ್ದ ನಾಲ್ಕಾರು ಬಟ್ಟೆಗಳನ್ನು ಎತ್ತಿಕೊಂಡು ಮೆಜೆಸ್ಟಿಕ್ನಲ್ಲಿ ಸಿರ್ಸಿಗೆ ಹೋಗುವ ಬಸ್ ಹಿಡಿದು ಕಿಡಕೀಯ ಪಕ್ಕ ಕುಳಿತು ಹದಿನಾರಾಣೆ ಮೈಲಿಕಲ್ಲಿನ ಶ್ರೀಯುತರ ಬಗ್ಗೆ ಮನಸ್ಸಿನ ವಿಚಾರವನ್ನು ಅಟ್ಟಿದಾಗ ಕೈಯಲ್ಲಿನ ಗಡಿಯಾರ ಆ ಸಮಯವನ್ನು ತೋರಿಸುತಿತ್ತು.
ಶ್ರೀಯುತರಿಗೆ  ಸೊಂಟ ನೋವು ಪ್ರಾರಂಭವಾಗಿದ್ದು ಹೇಗೆ , ಯಾಕೆ ಯಾವತ್ತು  ಎಂಬ ವಿಚಾರವಾಗಿ ಹದಿನಾರನೇ ಮೈಲಿಕಲ್ಲಿನ ಜನರಲ್ಲಿ ತರಹೆವಾರಿ ವಿಚಾರಗಳಿದ್ದರು ಅವರೆಲ್ಲರ ಏಕಮಾತ್ರ ಅಭಿಪ್ರಾಯವೆಂದರೆ ಶ್ರೀಯುತರಿಗೆ ಇದ್ದುದು ಸೊಂಟನೋವೆಂದು. ಕೆಲವರು ಹೇಳುವಂತೆ ಶ್ರೀಯುತರ ಸೊಂಟನೋವು ಅವರ ಪೂರ್ವಜನ್ಮದ ಕರ್ಮದ ಫಲವೆಂದೂ , ಇನ್ನೂ ಕೆಲವರು ಹೇಳುವಂತೆ ಅವರಿಗೆ ಸೊಂಟನೋವು ಹುಟ್ಟುವ ಮೊದಲೇ ಇತ್ತೆಂದೂ , ಇನ್ನೂ ಕೆಲವರು ಹೇಳುವಂತೆ ಅದು ಬಾಲ್ಯದಲ್ಲಿ ಪ್ರಾರಂಭವಾಗಿ , ಶ್ರೀಯುತರು ಬೆಳೆದಂತೆ ಅದು ಬೆಳೆದು ಇವಾಗ ಅದಕ್ಕೆ ಶ್ರೀಯುತರಷ್ಟೇ ವಯಸ್ಸು , ಅನುಭವ ಆಗಿದೆಯೆಂದೂ ಹೇಳುತ್ತಾರೆ.
ಇನ್ನೂ ಊರಿನ ಕೆಲ ಹಿರಿಯರು ಹೇಳುವಂತೆ ಶ್ರೀಯುತರ ಸೊಂಟನೋವು ವಂಶಾನುಗತವಾಗಿ ಬಂದಿದ್ದು. ಇನ್ನೂ ಕೆಲವು ಹಿರಿಯರು ಮತ್ತು ಮುಂದಕ್ಕೆ ಹೋಗಿ ಶ್ರೀಯುತರ ಮುತ್ತಾತನ ಅಪ್ಪ ಯಾವುದೋ ಘನ ವ್ಯಕ್ತಿಗೆ ಸೊಂಟದ ಮೇಲೆ ಬಾರಿಸಿದರಿಂದ ಆ ಘನ ವ್ಯಕ್ತಿಯು ಶ್ರೀಯುತರ ವಂಶಕ್ಕೆ ಘನಾಘೋರವಾದ ಸೊಂಟ ನೋವಿನ ಶಾಪ ಕೊಟ್ಟನೆ೦ದು ಹೇಳುತಿದ್ದುದು ಇದೆ.  ಒಟ್ಟಿನಲ್ಲಿ ಶ್ರೀಯುತರ ಸೊಂಟ ನೋವು , ಎಲ್ಲರ ಬಾಯಲ್ಲಿಯೂ ತನ್ನದೇ ಆದ ಲಾಜಿಕ್‌ನ್ನು ಪಡೆದು ,  ಅವರಿವರ ಬಾಯಲ್ಲಿನ ಲಾಲರಸಾದಿಂದ ನೆನೆದು ಒಬ್ಬರಿಂದ ಮತ್ತೊಬ್ಬರಿಗೆ ಅಂಟು ರೋಗದಂತೆ ಹರಡುತಿಟ್ಟು. ಶ್ರೀಯುತರ ಸೊಂಟ ನೋವಿನ ಬಗ್ಗೆ ಮಕ್ಕಳು ಮುದುಕರು ಹಿರಿಯರು ಕಿರಯರು ಹೆಂಗಸರು ಗಂಡಸರು ಹೀಗೆ ಎಲ್ಲರೂ ತಮ್ಮದೇ ಆದ ವಿಚಾರ ಧಾರೆಯನ್ನು ಹರಿಯ ಬಿಟ್ಟು ವಾದ ವಿವಾದಗಳಲ್ಲಿ ಮುಳುಗಿ ತೇಲಿ , ತಮ್ಮ ತಮ್ಮ ಪ್ರಕಾಂಡ ವಾಕ್ ಚಾತುರೈವನ್ನ ತೋರಿಸಿದ್ದೂ ಅಲ್ಲದೇ , ತಾವು ಹೋದಲೆಲ್ಲಾ ಅದರ ಬಗ್ಗೆ ತಮ್ಮ ಶಕ್ತ್ಯಾನುಸಾರ ಪ್ರಚಾರ ಕೊಟ್ಟಿದುದರಿಂದ ಶ್ರೀಯುತರ ಸೊಂಟ ನೋವು ಹದಿನಾರನೇ ಮೈಲಿಕಲ್ಲನ್ನು ದಾಟಿ , ಅದರ ಹೊರಗಿನ ಪರಿಧಿಗೂ ಬೆಳೆದು , ಆಗಸಕ್ಕೆ ನೆಗೆದು ನಿಂತು , ತನ್ನ ಬಾಹುಗಳನ್ನು ಚಾಚಿ , ಕಿಸಕ್ಕನೆ ಹಲ್ಲು ಕಿಸಿದು ಗಹಗಹಿಸಿ ಅಟ್ಟಹಾಸಂಗೈಯುತಿಟ್ಟು.
ಪ್ರೀಯ ಓದುಗರೇ ,
ಶ್ರೀಯುತರ ಸೊಂಟ ನೋವಿನ ಬಗ್ಗೆ ಇಲ್ಲಿಯವರೆಗೆ ಹಲವಾರು ಕಥೆಗಳು , ಉಪಕಥೆಗಳೂ , ಅಪ್ಪ ಕಥೆಗಳು , ಅಮ್ಮ ಕಥೆಗಳು , ಮಗ , ಮೊಮ್ಮಗ , ಮರಿ ಕಥೆಗಳೂಸೇರಿಕೊಂಡು ಕಥೆಗಳ ಒಂದು ಅನೂಹ್ಯ ಸರಣಿಯನ್ನೇ ನಿರ್ಮಿಸಿ , ಆ ಸರಣಿಯ ಕೊಂಡಿ ಕೊಂಡಿ ಸರಪಳಿಯಲ್ಲಿ ಸಮಸ್ತ ಹದಿನಾರನೇ ಮೈಲಿಕಲ್ಲು ಪರಿಸರವನ್ನು ಸುತ್ತುವರೆದು ಕೇಕೆ ಹಾಕುತಿದ್ದವು.
ಇಲ್ಲಿ ನಾನು ಈಗ  ಹೇಳ ಹೊರಟಿರುವದು ಅಂತಹ ಕೆಲವು ಕಥೆಗಳನ್ನೇ.


ಕಳಗದ್ದೆ ಗಪ್ಪತಿ ಮಾಸ್ತರರು ಹೇಳಿದ ಕಥೆ :
ಅದು ಅಡಕೆಯ ಧಾರಣೆ ಗಗನಕ್ಕೆ ಏರಿ ನಾಟ್ಯವಾಡುತಿದ್ದ ಕಾಲ. ಆಗ ನಮ್ಮ ಶ್ರೀಯುತರು , ಯಡಳ್ಲಿಯ ಜ್ಯೂನಿಯರ್ ಕಾಲೇಜಿನಲ್ಲಿ ಸೀನಿಯರ್ ಆಗಿದ್ದರು. ಶ್ರೀಯುತರಿಗೆ ಹುಬ್ಬಳ್ಳಿ , ಬೆಂಗಳೂರು , ಮೈಸೂರು ಮೊದಲಾದೆಡೇ ಪರಿಚಯದವ್ರು , ಮಿತ್ರರು ಇದ್ದ ಕಾರಣ ಆವ್ರು ತಕ್ಕ ಮಟ್ಟಿಗೆ ಆಧುನಿಕ ತರುಣರೇ ಆಗಿದ್ದರು.
ಆಗ ಶ್ರೀಯುತರ ತಕ್ಷಣ ಕಿರು ತರಗತಿಯವಳಾಗಿದ್ದವಳು ಪೆಟೆಸರದ ಎಮ್.ವಿಲಾಸಿನಿ ಹೆಗಡೆ.  ಸಮಸ್ತ  ಕಾಲೇಜಿನ ಯಾ ಕಾಲೇಜಿನ ಆಸು ಪಾಸಿನ ಎಲ್ಲರ ಎದೆಯಲ್ಲೂ ಎಳ್ಳು ಕುಟ್ಟುವಂತೆ , ತನ್ನ ಅಪಾರ ಐಸೀರಿಯನ್ನು  ತೋರಿಸುತ್ತಾ , ಕೊಬ್ಬಿ ಬೆಳೆದ ಐಶ್ವರ್ಯವಂತೆ ವಿಲಾಸಿನಿ , ಎಂ. ಭರತೆಶ ಹೆಗಡೆಯ ಮಾವನ ಮಗಳು.
ಇಂತಹ ಎಮ್.ವಿಲಾಸಿನಿಯು , ಶ್ರೀಯುತರು ಒಬ್ಬರನೊಬ್ಬರು ನೋಡಿ , ಅವರಿಗಾಗಿ ಇವಳು , ಇವಳಿಗಾಗಿ ಅವರು ಎಂಬಂತೆ ಆಗಿ , ಪ್ರೀತೀಯಾಂಕುರವಾದ ಹೊಸ ಬಿಸಿಯಲ್ಲೇ ಶ್ರೀಯುತರು ಒಂದು ಹೊಚ್ಚ ಹೊಸ ಸೆಕೆಂಡ್ ಹ್ಯಾಂಡ್ ಬೈಕನ್ನು ಫಸ್ಟ್ ಹ್ಯಾಂಡ್ ವಿಲಾಸಿನಿಗೊಸ್ಕರ ಖರೀದಿಸಿದ್ದರು. ಇಬ್ಬರೂ ಕುಳಿತ ಮೇಲೂ ಆ ಬೈಕಿನಲ್ಲಿ ಮೂರನೆಯವ್ರು ಕುಳಿತುಕೊಳ್ಳಬಹುದಷ್ಟು ಜಾಗ ಇರುತಿತ್ತೆಂದು ಪಡ್ಡೆಗಳು ಆಡುತಿದ್ದ ಮಾತೂ ಸುಳ್ಳಲ್ಲ.
ಹೀಗೆ ಶ್ರೀಯುತರು , ವಿಲಾಸಿನಿಯು , ಬೈಕ್‌ನ ಒಟ್ಟು ಸವಾರಿಯಲ್ಲಿ ಮೈ ಮರೆಯುತಿದ್ದಾಗ ಒಂದು ದಿನ - : ಮುಂದೆ ಕುಳಿತ ಶ್ರೀಯುತರು ತಮ್ಮ ಅರ್ಹತೆಗೆ ಮೀರಿದ ವೇಗದಲ್ಲಿ ಬೈಕನ್ನು ಓಡಿಸುತ್ತಲೂ , ಹಿಂದೆ ಕುಳಿತ ವಿಲಾಸಿನಿ , ಪಟ-ಪಟನೆ ಯಾರು ಯಾರಿಗೋ ಮೆಸೇಜುಗಳನ್ನ ಕಳಿಸುತ್ತಲೂ ಇರುವಾಗ, ತ್ಯಾಗಲಿಯ ತಿರುವಿನಲ್ಲಿ ಬೈಕ್ ಸ್ಕಿಡ್ ಆದ ರಭಸಕ್ಕೆ ಕೆಳಗೆ ಶ್ರೀಯುತರೂ , ಅವರ ಮೇಲೆ ಬೈಕೂ , ಬೈಕಿನ ಮೇಲೆ ವಿಲಸಿನಿಯೂ ಬಿದ್ದ ಭಯಾನಕತೆಗೆ , ಶ್ರೀಯುತರ ಸೊಂಟದ ಮೂಳೆ ತಿರುಗಿ ಕಳಕ್ ಎಂದು , ಎಮ್.ವಿಲಾಸಿನೀಯ ರಿಂಗ್ ಟೋನ್ ಹಾಗೆ ಶಬ್ದ ಮಾಡಿದ್ದನ್ನು ತಾನೇ ಕೇಳಿದ್ದೇನೆ ಎಂದು ಗಪ್ಪತಿ ಮಾಸ್ತರರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದರು


ಮಾಸ್ತರರ ಕಥೆಗೆ ಒಂದು ಉಪಕಥೆ:
ಆದರೆ ನಾಣಿಕಟ್ಟಾದ ಪೀ. ಜಿ.  ಈ ಮಾತನ್ನು ಖಡಾಖಂಡಿತವಾಗಿ ತಳ್ಳಿ ಹಾಕುತ್ತಾರೆ. ಅವರು ಅಭಿಪ್ರಾಯದಂತೆ ಶ್ರೀಯುತರ ಸೊಂಟ ನೋವಿಗೆ ಎಮ್.ವಿಲಾಸಿನಿಯು ಪರೋಕ್ಷ ಕಾರಣವಗಿದ್ದರು , ಪ್ರತ್ಯಕ್ಷ ಕಾರಣವಂತೂ ಅಲ್ಲ..!! 


ಪೀ. ಜಿ. ಉವಾಚ : ಮಾಸ್ತರರು ಹೇಳುವಂತೆ ಶ್ರೀಯುತರಿಗೂ , ಎಂ. ವಿಲಸಿನಿಗು ಪ್ರೀತಿ , ಪ್ರೇಮ ಲವ್ವು ಎಲ್ಲವೂ ಇದ್ದುದು ನಿಜ. ಆದರೆ ಶ್ರೀಯುತರ ಸೊಂಟ ನೋವಿಗೆ ಕಾರಣವಾದವನು ಎಂ. ಭರತೆಶ ಹೆಗಡೆ..!!  ಎಂ. ವಿಲಸಿನಿಯ ವಿಚಾರವಾಗಿ ಶ್ರೀಯುತರಿಗೂ ,  ಎಂ. ಭರತೆಶ ನಿಗೂ ಭಯಾನಕ ಯುದ್ಧವೇ ಆಗಿ , ಕೊನೆಗೆ ಭರತೆಶ ಬಾರಿಸಿದ ಏಟು ಶ್ರೀಯುತರ ಸೊಂಟಕ್ಕೆ ಬಿದ್ದು , ಈ ಬಾರಿಯ ಮಾನವ ಜನ್ಮದಲ್ಲಿ ಮತ್ತೆ ಎಂ. ವಿಲಸಿನಿಯ ನೆನಪು ಬಾರದಂತೆಯೂ , ಜನ್ಮ ಪೂರ್ತಿ ನೆನಪು ಇಟ್ಟು ಕೊಳ್ಳುವಂತೆ ಸೊಂಟ ನೋವು ಪ್ರಾಪ್ತವಾಯಿತೆಂದು , ಸಕಲ ಯದಳ್ಲಿ ಪಡ್ಡೆಗಳಿಗೂ ತಿಳಿದ ವಿಷಯ..

 

ಒಟ್ಟಿನಲ್ಲಿ ಶ್ರೀಯುತರಿಗೂ , ಎಂ. ವಿಲಾಸಿನಿಗೂ ಇದ್ದ ನಂಟು ಕಡಿದು ಹೋಗಿದ್ದು ಅಂತು ನಿಜ.  ಎಂ. ವಿಲಾಸಿನಿಯ ಪ್ರಕರಣ ಆದ ಮೇಲೆ , ಶ್ರೀಯುತರು ಮತ್ತೂ ಸುಮಾರು ಕಾಲ ಜ್ಯೂನಿಯರ್ ಕಾಲೇಜಿನಲ್ಲಿ , ವಿಲಾಸಿನಿಗೆ ಸೀನಿಯರ್ ಆಗಿಯೂ , ಕೊನೆಗೆ ಜೂನಿಯರ್ ಆಗಿಯೂ ಇದ್ದು , ಅಂತಿಮವಾಗಿ ಶ್ರೀಯುತರ ಪರಮ ಪೂಜ್ಯ ಜನ್ಮದಾತರು , ಅವರನ್ನು ಮುಂದಿನ ವೇದಾಭ್ಯಾಸಕ್ಕಾಗಿ ಕೃಷ್ಣಚಂದ್ರಾಪುರ ಮಠಕ್ಕೆ ಕಳುಹಿಸಿದರು.

ಶ್ರೀಯುತರ ಸೊಂಟ ನೋವಿನ ಬಗ್ಗೆ  ಪ್ರಭಾ ಹೇಳಿದ ಕತೆ :

ನಿಜವಾಗಿಯೂ ಶ್ರೀಯುತರಿಗೆ ಸೊಂಟನೋವು ಪ್ರಾರಂಭವಾಗಿದ್ದು , ಕಾಲೇಜಿನಲ್ಲಿ ಇರುವಾಗಲಲ್ಲ. ಇದು ಅವರು ಕಾಲೇಜು ಬಿಟ್ಟು ಕೃಷ್ಣಚಂದ್ರಪುರಕ್ಕೆ ಹೋದಾಗ ಅಲ್ಲಿಯ ಬಳುವಳಿಯಾಗಿ ಈ ಸೊಂಟನೋವು . ಅಲ್ಲಿ ಮಠದವರು ಪಶು ಪಾಲನೆ ಮಾಡಿದಂತೆ , ಶ್ರೀಯುತರು ರತ್ನಕ್ಕಂನ ಪಾಲನೆ ಮಾಡಿ , ಕೊನೆಗೆ ಮಠದವರಿಂದ
ಬಹಿಷ್ಕಾರವನ್ನೂ ,  ರತ್ನಕ್ಕನ ಸಹೋದರರಿಂದ ಒದೆಯನ್ನು , ಆ ಒದೆಯ ಪ್ರಸಾದವಾಗಿ ಸೊಂಟ ನೋವನ್ನು , ಇವೆಲ್ಲಕ್ಕೂ ಮೇಲೆ ಪತ್ನಿಯಾಗಿ ರತ್ನಕ್ಕನ್ನೂ ಕರೆತಂದುದು , ಪ್ರಭಾಳ ತವರು ಮನೆಯಾದ ಸಾಗರದ ಕಡೆಯಿಂದ ಬಂದ ವರದಿ.

ಹೀಗೆ ಶ್ರೀಯುತರ ಸೊಂಟನೋವಿನ ವಿಷಯವಾಗಿ ಊರವರೆಲ್ಲರೂ ತಮಗೆ , ತಮ್ಮ ತಿಳುವಳಿಕೆಗೆ ನಿಲುಕಿದಂತೆ , ತಮ್ಮ ತಮ್ಮ ಶಕ್ತ್ಯಾನುಸಾರ ಮಾತನಾಡಿ , ವಾದ ವಿವಾದಗಳ ಮಾಡಿ ಕೊನೆಗೆ ಒಮ್ಮತಕ್ಕೆ ಬರಲಾರದೇ ,  ಶ್ರೀಯುತರ ಸೊಂಟನೋವನ್ನು ತಾವೇ ಅನುಭವಿಸುತಿದ್ದಂತೆ ಸಂಕಟ ಪಡತೊಡಗಿದ್ದರು.
ಶ್ರೀಯುತರ ಸೊಂಟ ನೋವು ಹದಿನಾರನೇ ಮೈಲಿಕಲ್ಲಿನ ಜನಸಮುದಾಯದ ಮೇಲೆ ಒಂದು ಗಾಢವಾದ ಪ್ರಭಾವ ಬೀರಿತ್ತು.  ಹೊತ್ತು ಕಳೆಯಲು ಸಾಧ್ಯವಾಗದ ಅನೇಕ ಸಂಧರ್ಭಗಳಲ್ಲಿ ಅನೇಕರು ಶ್ರೀಯುತರನ್ನು ವಿಚಾರಿಸಿಕೊಂಡು ಬರುವ ನೆಪ ಮಾಡಿಕೊಂಡು ಅವರ ಮನೆಗೆ ಹೋಗಿ ರತ್ನಕ್ಕ ಮಾಡಿ ಕೊಡುವ ಬಿಸ್ಸಿ ಬಿಸ್ಸಿ ಟೀ ಕುಡಿದುಕೊಂಡು ಬರುವದೂ ಇದೆ. ಇನ್ನೂ ಕೆಲವರು ತಮ್ಮ ತಮ್ಮ ಶಕ್ತ್ಯಾನುಸಾರ ತೈಲಾದಿಗಳನ್ನು ಶ್ರೀಯುತರಿಗೆ ಹೇಳಿ , ತೋಚಿದಂತೆ ಔಷಧಗಳನ್ನು ತಿಳಿಸಿ , ಕೊನೆಗೆ ಶ್ರೀಯುತರಿಗೆ ಸೊಂತನೋವಿನ ಜೊತೆಗೆ ತಲೆನೋವು ಬರುವಂತೆ ಮಾಡಿದ್ದು ಇದೆ. ಊರಿನ ಪಡ್ಡೆಗಳಿಗೆ ಕ್ರಿಕೆಟ್ ಟೀಮ್ನ  ಸಕ್ರೀಯ ಸದಸ್ಯರೂ , ಹಾಗೂ ಹದಿನಾರನೇ ಮೈಲಿಕಲ್ಲಿನಲ್ಲಿ ನಡೆಯುತಿದ್ದ ಸಮಸ್ತ ಟೂರ್ನಿಗಳಿಗೂ ಉದಾರ ದಾನಿಗಳು ಆಗಿದ್ದ ಶ್ರೀಯುತರು ಹೀಗೆ ಸೊಂಟನೋವಿನಿಂದ ನರುಳುತಿದ್ದುದು ಪಡ್ಡೆಗಳ ಗ್ಯಾಂಗೆ ಒಂದು ಭಾರಿ ಆಘಾತವೇ ಆಗಿತ್ತು. ಸೊಂಟನೋವಿನಿಂದ ಬಳಲುತಿದ್ದ ಶ್ರೀಯುತರ ಬಳಿ LIC ಮೊತ್ತವನ್ನು ಹೇಗೆ ಕೇಳುವದೆಂದು ಮಧು ,  ಊರಿನ ಪಂಚಾಯತಿ ಚುನಾವಣೆಗೆ ಪ್ರಚಾರ ಬೆಂಬಲ ಕೋರುವದು ಹೇಗೆಂದು ರಾಮ್ರಜುವು ,  ಮೊನ್ನೆಯಷ್ಟೇ ಕೊಟ್ಟ ಮಗಳ ಜಾತಕದ ವಿಷಯ ಏನಾಯಿತೆಂದು ಭಾಗ್ಯಕ್ಕನೂ ,  ಕೊಟ್ಟ ಸಾಲವನ್ನು ಮರು ಪಡೆಯುವದು ಹೇಗೆಂದು ಹೆಗಡೆರು ಹೀಗೆ ಹತ್ತು ಹಲವು ಜನರು ಶ್ರೀಯುತರ ಸೊಂತನೋವಿನಿಂದ ಕಂಗಾಲಾಗಿದ್ದರು.
*              *                  *                         *                             *              *                  *                *
ಹೀಗೆ ಶ್ರೀಯುತರ ವಿಷಯ ತಾರಕಕ್ಕೆ ಏರಿ ಎಲ್ಲರನ್ನೂ ದಹಿಸುತ್ತಿರುವಾಗಲೇ ನಾನು ಊರಿಗೆ ಬಂದು ಇಳಿದಿದ್ದೆ.  ಶ್ರೀಯುತರ ಅಡಿಕೆ ತೋಟದ ಪಕ್ಕದ ತೋಟವೇ ನಾಗಪತಿಯಾದಾದ್ದರಿಂದ , ಶ್ರೀಯುತರು ಸೊಂಟನೋವಿನ ಕಾರಣದಿಂದ ಅಡಿಕೆ ತೋಟಕ್ಕೆ ಕೊಳೆ ರೋಗದ ಮದ್ದು ಹೊಡಿಸದೇ ಇದ್ದ ಕಾರಣದಿಂದ ಎಲ್ಲಿ ಅವರ ತೋಟದಿಂದ ತನ್ನ ತೋಟಕ್ಕೆ ರೋಗ ಹರಾಡುವದೋ ಎಂಬ ನಾಗಪಾತಿ , ನಾನು ಮನೆಗೆ ಬಂದ ತಕ್ಷಣ ಆತಂಕ ವ್ಯಕ್ತ ಪಡಿಸಿದ್ದ.
ಹೀಗೆ ಅಲ್ಪ ಸ್ವಲ್ಪ ವಿಶ್ರಾಂತೀಯ ನಂತರ ನಾನು ಶ್ರೀಯುತಾರ ಮನೆಗೆ ಸವಾರಿ ಬೆಳೆಸಿದೆ.

ಹಲವ್ವಾರು ಸುತ್ತಿನ ಮಾತುಕತೆಗಳು , ಚಹಾ ಸೇವನೆಯೂ ಆಗಿ , ಸೊಂಟನೋವಿನ ಕರುಣಾಜನಕ ಇತಿಹಾಸವನ್ನು , ವರ್ತಮಾನವನ್ನು ತಿಳಿದು ಇನ್ನೇನು ಮಾಡಬೇಕೆಂದು ನಾನು ತೋಚದೆ ಸುಮ್ಮನೇ ಕುಳಿತಿದ್ದಾಗ , ಶ್ರೀಯುತರು ನನ್ನ ಕಿವಿಗೆ ಮುಖ ಕೊಟ್ಟು ಯಾವುದೋ ರಹಸ್ಯ ಹೇಳುವಂತೆ ಪಿಸುಗುಟ್ಟಿದರು.
" ಮಾರಾಯ ಇದು ನಂಗೆ ಸೊಂಟನೋವಲ್ಲ , ಬೆನ್ನು ನೋವು ಮಾರಾಯ..!!"

No comments:

Post a Comment