Tuesday, May 14, 2013

ಬಕಿಟುಂ ಬಹು ವಿಧ ರೂಪಂ !

ಬೆಳಿಗ್ಗೆ ಎದ್ದ   ತಕ್ಷಣ  ಮೊಸರುದ್ದೀನ ಮಾಡುತ್ತಿದ್ದ ಕೆಲವೆಂದರೆ ಅಸ್ತವ್ಯಸ್ತವಾಗಿ ಬಿದ್ದಿದ್ದ ಚಾದರವನ್ನು ಮಡಚಿಡುವದು .  ಆಯತಾಕಾರದ ಚಾದರದ ಬಲ ಹಾಗೂ ಎಡದ ಎರಡೂ ತುದಿಗಳನ್ನು ಒದಕ್ಕೊಂದು ಸೇರಿಸಿ ಹಿಡಿದುಕೊಂಡು ಥಟ್ಟನೆ ಎದ್ದು ನಿಂತು , ಎರಡೂ ಕೈಗಳನ್ನು ತಲೆಯ ಮೇಲಕ್ಕೆ ಎತ್ತಿ ಚಾದರ ಅಂಚುಗಳು ಸಮನಾಗಿಯೇ ಎಂದು ನೋಡುತ್ತಿದ್ದ . ಇದ್ದಾದ ನಂತರ ಚಾದರವನ್ನು ಅರ್ಧ  ಭಾಗದಲ್ಲಿ ಮಡಚಿ , ಮತ್ತೆ ಕೈಗಳನ್ನು ಮೇಲಕ್ಕೆತ್ತುತ್ತಿದ್ದ . ಈ ಕ್ರಿಯೆಯನ್ನು ಹಲವಾರು ಬಾರಿ ಪುನರಾವರ್ತಿಸಿದ ನಂತರ ಚಾದರವನ್ನು ದಿಂಬಿನೆಡೆಗೆ ಸರಕ್ಕನೆ ಚಕ್ರವೆಸೆದಂತೆ ಎಸೆಯುತ್ತಿದ್ದ. ಚಾದರವನ್ನು ಮದಚಿದಷ್ಟೇ ಪ್ರೀತಿಯಿಂದ ಮೊಸರುದ್ದೀನ ಹಾಸಿಗೆ ಮಡಚುತ್ತಿರಲಿಲ್ಲ . ಹಾಸಿಗೆಯನ್ನು ಇದ್ದ ಸ್ವರೂಪದಲ್ಲಿಯೆ ಸುರುಳಿ ಸುತ್ತಿ , ಶರವೇಗದಲ್ಲಿ ಪಾಯಖಾನೆಗೆ ಓಡಿ , ಆಂಗ್ಲ ಶೈಲಿಯ ಕಮೋಡಿನಲ್ಲಿ ಭಾರತೀಯ ಪರಂಪರೆಯ ಕಾಯುವ ವೀರ ಯುವಕನಂತೆ ಕುಕ್ಕರುಗಾಲಿನಲ್ಲಿ ಕುಳಿತು ಬಹು ಎತ್ತರದ ಪ್ರದೇಶದಿಂದ , ಹೊಲಸಿನಿಂದ ತಾನು ಬಹು ಎತ್ತರದ ಪ್ರದೇಶದಲ್ಲಿ  ಇರುವವ ಎನ್ನುವ ಅವರ್ಚನಿಯ ಭಾವ ಹೊಳೆದು ವಿಸರ್ಜನಾ ಸುಖ ಅನುಭವಿಸುತ್ತಿದ್ದ . ಇಷ್ಟಾದರೂ ಅದರ ಆ ಭಾವನೆಯ ಜೊತೆ ಜೊತೆಗೆ ಈ  ವಿಸರ್ಜನೆ ತನ್ನ ಹೊಟ್ಟೆಯೊಳಗೆ ಸಂಗ್ರಹವಾಗಿತ್ತೆಂಬ ಯೋಚನೆ ಹೊಳೆದು ಬೆಚ್ಚಿ ಬೀಳುತ್ತಿದ್ದುದು ಇದೆ . ಪಾಯಖಾನೆಯ ಬಾಗಿಲಿಗೆ ಹಲ್ಲುಜ್ಜುವ ಹಲವಾರು ಸಲಕರಣೆಗಳನ್ನು ಇಟ್ಟುದದರಿಂದ ಮೊಸರುದ್ದಿನರು , ವಿಸರ್ಜನೆಯ ಬೆಚ್ಚಿ ಬೀಳುವ ಪರ್ವವಾದೊಡನೆ ಹಲ್ಲಿಜ್ಜಲು ಪ್ರಾರಂಭಿಸುತ್ತಿದ್ದನು . ಹೀಗೆ ಜೀರ್ಣ ಕ್ರಿಯೆಯ ಬುಡ ಹಾಗು ತುದಿಗಳೆರಡರ   ಸ್ವಚ್ಚತಾ  ಕಾರ್ಯ ಮುಗಿದೊಡನೆ ಬಚ್ಚಲು ಮನೆಯನ್ನು ಘನ ಗಾಂಭಿರ್ಯದಿಂದ ಪ್ರವೇಶಿಸುತ್ತಿದ್ದ

ಮೊಸರುದ್ದೀನನ ಬಚ್ಚಲು ಮನೆ ಎಂಬುದು ಒಂದು ಕತ್ತಲು ಬೆಳಕಿನ ಮಂದ ಮಾಯಾಲೋಕವೇ ಸರಿ . ಮೊಸರುದ್ದೀನನ  ಬಚ್ಚಲು ಮನೆಯೆಂದರೆ ಅದೊಂದು ಬಕೀಟುಗಳ  ಲೋಕ . ಅನಾದಿಕಾಲದಿಂದಲೂ  ಬಕಿಟು ಹಿಡಿಯುವ , ಬಕೀಟು ಸಂಗ್ರಹಿಸುವ  ಹುಚ್ಚಿನ ಮೊಸರುದ್ದೀನನ ಮನೆಯಲ್ಲಿ ತರಹೇವಾರಿ ಬಕೀಟುಗಳು ತಮ್ಮ ತಮ್ಮ ಆಯುಷ್ಯವನ್ನು ಕಳೆಯುತ್ತಿದ್ದವು . ವಿಸರ್ಜನ ಕ್ರಿಯೆಯಿಂದ ಬಚ್ಚಲು ಮನೆಯನ್ನು ಹೊಕ್ಕ ಮೊಸರುದ್ದೀನನಿಗೆ ಸುತ್ತ ಜೋಡಿಸಿಟ್ಟಿರುವ ಸಣ್ಣ , ಅಗಲ ದೊಡ್ಡ , , ಗಿಡ್ಡ ಉದ್ದನೆಯ , ತೆಳ್ಳನೆಯ , ದಪ್ಪನೆಯ , , ಬಣ್ಣವಿರುವ ಬಣ್ಣವಿಲ್ಲದ , ,ಹಿಡಿಕೆಯಿರುವ  ಹಿಡಿಕೆಯಿರದ ಹಲವರು ಬಕೀಟುಗಳು ಕಣ್ಣಿಗೆ ಬೀಳುತ್ತಲೆ ಅತ್ಯುತ್ಸಾಹ ಉಕ್ಕಿ ಬರುತ್ತಿತ್ತು

*****************************************************************
ಮೊಸರುದ್ದೀನನಿಗೆ ಬಕೀಟುಗಳ ಹುಚ್ಚು ಯಾವಾಗ ಪ್ರಾರಂಭವಾಯಿತು ಎನ್ನುವದರ , ಕುರಿತು ಖಚಿತ ಮಾಹಿತಿ , ಅಲಭ್ಯವಾಗಿದ್ದರೂ , ಅವರೊಡನೆ ಯಾವತ್ತು ವ್ಯವಹರಿಸಿದ , ಮಾತನಾಡಿದ ಎಲ್ಲರಿಗು ಮೊಸರುದ್ದಿನರು ಬಕೀಟು ಹಿಡಿಯುವದರಲ್ಲಿ ಪ್ರಚಂಡ ಪರಿಣಿತರು ಎನ್ನುವದ ಖಚಿತ ಪಡಿಸಿದ್ದರು . ಕೆಲಸಕ್ಕೆ ಸೇರುವದಕ್ಕೂ ಮೊದಲು ಬಕೀಟುಗಳ , ಸ್ವಯಂವರಾಪಹರಣ ಮಾಡುತ್ತಿದ್ದ ಮೊಸರುದ್ದೀನ , ಕೆಲಸಕ್ಕೆ ಸೇರಿದ ಮೇಲೆ ಪ್ರತಿ ತಿಂಗಳ ಮೊದಲ ಸಂಬಳದಲ್ಲಿ ಹೊಸ ಬಕೀಟು ತರುವ ಪರಿಪಾಠ ರೂಢಿಸಿಕೊಂಡಿದ್ದರು.ಗಾಂಧಿ ಬಜಾರಿನ ಪ್ಲಾಸ್ಟಿಕ್ ಸಾಮಾನುಗಳ ಮಾರುವ ಅಂಗಡಿಯ ಖಾಯಂ ಗಿರಾಕಿಯದ ಮೊಸರುದ್ದೀನರಿಗೆ , ಅಂಗಡಿಯ ಮಾಲೀಕ ಹೊಸ ಬಕೀಟು ಬಂದಾಗಲೆಲ್ಲ ಫೋನಾಯಿಸುತ್ತಿದ್ದುದು ಹೌದು . ಹಲವಾರು ಬಾರಿ ಮಾಲೀಕ ರಾತ್ರಿ ಅಂಗಡಿ ಮುಚ್ಚುವ ವೇಳೆಯಲ್ಲಿ ಫೋನಾಯಿಸಿ ಹೊಸ ಬಕೀಟ್ ಬಂದಿರುವ ವಿಚಾರ ತಿಳಿಸಿದಾಗಲೆಲ್ಲ , ರಾತ್ರಿಯಿಡಿ ಕಾಡು ಕುಳಿತ , ಸ್ವಪ್ನದಲ್ಲೂ ಬಕೀಟುಗಳ ಬಗ್ಗೆ , ಕನವರಿಸಿ , ಹೊಸ ಬಕೀಟಿನ ಕಲ್ಪನೆಯಲ್ಲಿ ಬೆಳಗಿನ ಜಾಮದವರೆಗೆ ನಿದ್ರೆಯಿಲ್ಲದೆ ಹೊರಳಾಡಿ ಬಳಲಿ ಬೆಂಡಾಗಿ ತಳ ಒಡೆದ ಬಕೀಟು ,ಆಗಿ  ಮಹಾದುರತೆಯಿಂದ ಮರುದಿನ ಬೆಳಿಗ್ಗೆ ಅಂಗಡಿಯ ಬಾಗಿಲಿನಲ್ಲಿ ಕಾದು  ಕೂರುತ್ತಿದ್ದುದುಪಪದೇ ಪದೇ ನಡೆಯುವ  ಸಾಮಾನ್ಯ ಘಟನೆ . . ಬಾಗಿಲು ತೆರೆದೊಡನೆ ಅಂಗಡಿಯ ಒಳಹೋಗುವ ಮೊಸರುದ್ದೀನನಿಗೆ ಅಂಗಡಿಯೊಳಗೆ ಥರ ಥರದ ಬಕಿಟುಗಳ ಕಂಡು ತಾನು ಪುರುಷ ಪುಂಗವನೆಂದು , ಬಕೀಟುಗಳೇಲ್ಲ ವಿರಹ ವೇದನೆಯಿಂದ ನರಳುತ್ತಿರುವ ಸುಕೋಮಲ ಲಲನಾಂಗಿಗಳೆಂದು ಭಾಸವಾಗಿ , ರಾತ್ರಿಯ ಸ್ವಪ್ನಗಳನ್ನೆಲ್ಲ ಅವುಗಳ ಮೇಲೆ ಸ್ಖಲಿಸುವ ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದ್ದ. ಮೊಸರುದ್ದೀನನ ಈ ನಡತೆಯ ಪರಿಚಯವಿದ್ದ ಮಾಲೀಕ , ಮೊದಲೇ ಎತ್ತಿಟ್ಟಿರುವ ಫಳ ಫಳ ಹೊಳೆಯುವ ಹೊಸ ಬಕೀಟನ್ನು ಎತ್ತಿ ಕೊಡುತ್ತಿದ್ದ .   ಇದು ಬಚ್ಚಲು ಮನೆಗೆ ಬಕೀಟುಳ  ಆಗಮದ ಹಿಂದಿನ ಬಹುತೇಕ  ಘಟನೆ.

ಬಚ್ಚಲು ಮನೆಗೆ ನುಗ್ಗಿದ ಕೂಡಲೆ ಮೊಸರುದ್ದೀನ ಬಕೀಟಾವಲೋಕನ ಮಾಡಿ ಅಂದಿನ ಕ್ರಿಯೆಗೆ ತಕ್ಕನಾದಒಂದು ಬಕೀಟನ್ನು ಆಯ್ಕೆ ಮಾಡುತ್ತಿದ್ದ . ಹೀಗೆ ಆರಿಸಿದ ಬಕೀಟನ್ನು ಹಗುರವಾಗಿ ಎತ್ತಿ , ಅದಕ್ಕೆ ಲೊಚ ಲೋಚನೆ ಮುದ್ದಿಟ್ಟು , ಸವರಿ , ತಬ್ಬಿ ಅದರೊಳಗೆ ೧ /೪ ಭಾಗ ನೀರನ್ನು ತುಂಬುತ್ತಿದ್ದ .  ತದನಂತರ ಅದರೊಳಗೆ ಬಲಗೈನ್ನು ಇಳಿ ಬಿಟ್ಟು , ಎಡಗೈ ನಲ್ಲಿ ಬಕೀಟನ್ನು ತಬ್ಬಿ ಹಿಡಿದು , ಗಲ್ಲವನ್ನು ಬಕಿಟಿನ ಮೇಲ್ಮೈಗೆ ಆನಿಸಿ , ಕಣ್ಣನ್ನು ಅರ್ಧ ತೆರೆದು  ಮುಚ್ಚಿ ಬಕಿಟಿನೊಳಗೆ ಇಳಿ ಬಿಟ್ಟ ಕೈಯನ್ನು ನಿಧಾನವಾಗಿ ತಿರುಗಿಸಲು ಪ್ರಾರಂಭಿಸುತ್ತಿದ್ದ. ಹಂತ ಹಂತವಾಗಿ ವೇಗವನ್ನು ವ್ರುದ್ದಿಸಿಕೊಳ್ಳುತ್ತ ಹೋಗಿದಂತೆ ೧/೪ ಭಾಗ ತುಂಬಿದ್ದ ನೀರು  ಅಲೆ ಅಲೆಯಾಗಿ ಸುಳಿ ಸುಳಿಯಾಗಿ ರಭಸದಿಂದ ಬಕೀಟಿನ ತಳದಲ್ಲಿ ಕೇಂದ್ರವೊಂದನ್ನು ನಿರ್ಮಿಸಿ , ಅದರೊಳಗಿನಿಂದ ಎದ್ದ ಪ್ರಾವಾಹವಾಗಿ ಚಿಮ್ಮಿ ಮೊಸರುದ್ದೀನನ ಗಲ್ಲಕ್ಕೆ ತಾಕಿದಾಗ , ನೀರನ್ನು ಥಟ್ಟನೆ ಎದ್ದು , ಉನ್ಮಾದ ತುಂಬಿದ  ದೃಷ್ಟಿಯಿಂದ ನೋಡುತ್ತಾ ಪ್ರವಾಹದೊಳಗೆ ತಾನೂ , ಸುಳಿಯಾಗುತ್ತ ತಾನು ಇಲ್ಲಿಯವೆರೆಗ್ ಹಿಡಿದಿರುವ ಎಲ್ಲ ಬಕೀಟುಗಳು ಬಿಂದುವಿನೊಳಗೆ  ಘನೀಕರಿಸಿವೆ ಎನ್ನುವಷ್ಟರಲ್ಲೇ ಮೊಸರುದ್ದೀನರಿಗೆ ಸಂಶಯವೊಂದು ಧುತ್ತನೆ ಬೆಳೇಯಲಾಗಿ ಮೊಸರುದ್ದೀನ ಬೆಚ್ಚಿ ಬಿದ್ದನು.

*****************************************************************
ಹೀಗೆ ಅಚಾನಕ್ ಆಗಿ ನಾನು ಮೊಸರುದ್ದಿನ ನಾಡವನಿಗೆ ಸಂದೇಹ ಬಂದಿತ್ತು ಎಂದು ಪ್ರಾರಂಭ ಮಾಡಿದ್ದು ನಿಮಗೂ ಈ ಮೊಸರುದ್ದಿನ ಎಂಬ ಹೆಸರುಳ್ಳ ಜೀವಿ ಯಾರು ಎಂಬ  ಸಂದೇಹ ಮೂಡಿಸಿರಲಿಕ್ಕೆ ಸಾಕು. ನಿಮಗೆ ಸಹ  ಸಂದೇಹ ಬಂದಿರುವಾಗ  ಇನ್ನು ನಮ್ಮ ಕಥಾನಾಯಕನಾದ ಮೊಸರುದ್ದಿನನಿಗೆ ಸಂದೇಹ ಬಂದಿರುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೊಸರುದ್ದಿನನ ಬಗ್ಗೆ ಗೊತ್ತಿದ್ದ ಯಾವ ಜನಾಂಗಕ್ಕೆ ಸೇರಿದ ಜನರಾದರೂ ವಾದ ಮಾಡಿಯಾರು.   ಶ್ರೀಯುತ ಮೊಸರುದ್ದೀನರಿಗೆ  ಐತಿಹಾಸಿಕವಾಗಿ ಬಹು ಘನತೆಯುಳ್ಳ ಹಿನ್ನಲೆಯೇನೂ ಇಲ್ಲ. ಆದರೂ ಇರುವಂತಹ ಕೆಲವು ಹಿನ್ನಲೆಗಳು , ಆ ಹಿನ್ನಲೆಗಳ ಪರಿಚಯವಿದ್ದವರಿಗೆ , ಮೊಸರುದ್ದಿನ ಒಬ್ಬ ಬಹು ಘನತೆಯುಳ್ಳ ವ್ಯಕ್ತಿಯಂತೆ ತೋರಿದ್ದರೆ ಅಚ್ಚರಿಯೂ ಇಲ್ಲ. ಮೊಸರುದ್ದಿನರು ಮೂಲತಃ ಮೂಲದಿಂದ ಬಂದವರಾಗಿದ್ದರು ಸಧ್ಯಕ್ಕೆ ಗಾಂಧಿ ಬಜ಼ಾರಿನ ನಿವಾಸಿಯಾಗಿದ್ದಾರೆ.  ಇವರು ಹೇಳಲಿಕ್ಕೆ ಆಗುವಂತಹ ಕೆಲಸವನ್ನು ಮಾಡದಿದ್ದರೂ , ಇಲ್ಲಿ ಹೇಳಲಿಕ್ಕೆ ಆಗದ ಹಲವಾರು ಕೆಲಸಗಳನ್ನು  ಮಾಡಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಂಬೋಣ . ಇದು ಅವರ ಇತಿಹಾಸ ಹಾಗೂ ಪ್ರಸ್ತುತ ವಿಷಯ.
ಇನ್ನು ಬಾಹ್ಯ ಪರಿಚಯದ ವಿಷಯಕ್ಕೆ ಬಂದರೆ ಮೊಸರುದ್ದಿನರು ನೇರವಾಗಿ ನಿಂತರೆ ತಲೆಯವರೆಗೂ ಎಲ್ಲಿಯೂ ಅಂತರವಿಲ್ಲದೇ ಬೆಳೆದಿದ್ದಾರೆ. ಮೊಸರುದ್ದೀನರ ಕೈ ಸದಾ ಕಾಲ ದೇಹದ ಉಳಿದ ಭಾಗಗಳನ್ನು ಸವರಿ ಅವುಗಳ ಯೋಗಕ್ಷೇಮ ವಿಚಾರಿಸುತ್ತಾ ಕಾಲಹರಣ ಮಾಡುತ್ತದೆ. ಹೀಗೆ ಕೈ ಸಾಗುವ ಹಾದಿಯಲ್ಲಿ ಬೆಳೆದ  ಅರಳಿ ನಿಂತ ಮೂಗಿನ ಹೊಳ್ಳೆಗಳು , ಅಗಲಿಸಿ ಕುಳಿತ ಕಿವಿಯ ತೂತುಗಳು , ಬೆನ್ನು , ಹೊಟ್ಟೆ  ಮುಂತಾದ ದೇಹ ಸಂಬಂಧಿ ಅಂಗಾಂಗಗಳೆಲ್ಲಾ ,  ಅವುಗಳಿಗೆ ನಿರ್ದಿಷ್ಟಪಡಿಸಿದ್ದ ಜಾಗೆಗಳಲ್ಲಿ ಮೊಸರುದ್ದಿನನ ಹುಟ್ಟಿನಿಂದಲೂ ಬಾಳಿ ಬದುಕುತ್ತಾ ಇದ್ದವು. ಮೊಸರುದ್ದಿನನ ತಲೆ ಮೇಲೆ ಹುಲುಸಾಗಿ ಬೆಳೆದ ಕೂದಲುಗಳು ಆವಾಗಾವಾಗ ಮೊಸರುದ್ದಿನನಂತೆ ಬಣ್ಣ ಬದಲಿಸುತ್ತಿದ್ದವು. ಈ ತೆರನಾದ  ಬಾಹ್ಯ ಲಕ್ಷಣಗಳ ಯಜಮಾನರಾದ ಮೊಸರುದ್ದೀನ್ರಿಗೇ ಸಂದೇಹ ಬಂದಿತ್ತು.

ಮೊಸರುದ್ದಿನನ ಸಂಶಯಕ್ಕೆ ಲಿಖಿತ ಇತಿಹಾಸ ಇಲ್ಲದಿದ್ದರೂ , ಬಾಯಿಂದ ಬಾಯಿಗೆ ಹರಡಿರುವ ಹಲವಾರು ಜಾನಪದ ಇತಿಹಾಸವಂತೂ ಇದೆ. ಮೊಸರುದ್ದಿನನ ಯಾವತ್ತೂ ಅಜ್ಜಿಯಾದ ಪಾರೋತಿ ಕೊಂ ಜನ್ನ ನಾಡವರು ಆಗಾಗ ಹೇಳುವಂತೆ ಮೊಸರುದ್ದಿನನು ಹೊಟ್ಟೆಯಿಂದ ಬರುವಾಗ ಒಂದು ಕಾಲನ್ನು ಇನ್ನೊಂದರ ಮೇಲೆಕ್ಕೆ ಹಾಕಿಕೊಂಡಿದ್ದಾನೆಂದು , ಹೀಗಾಗಿ ಹುಟ್ಟಿದ ಮಗು ಗಂಡೇ ಅಥವಾ ಹೆಣ್ಣೆ ಎಂದು ಚಣಕಾಲ ಎಲ್ಲರಿಗೂ ಸಂದೇಹವಾಯಿತೆಂದು ,  ಆವಾಗಾವಾಗ ಹೇಳುವದುಂಟು.  ಆದರೆ ಈ ಘಟನೆಯಿಂದ ಮೊಸರುದ್ದಿನನ ಮನೆಯವರಿಗೆ ಆದ ಮುಜುಗರ ಅಷ್ಟಿಷ್ಟಲ್ಲ . ನಾಡವರ ಮನೆಯವರಿಗೆ ಮಗು ಜನಿಸುವ ಸಮಯವೆಂದು ಆಸ್ಪತ್ರೆಯ ಬಳಿ ಬಂದಿದ್ದ ಕೆಲಸದ ದ್ಯಾಮ್ಯ , ಹುಟ್ಟಿದ್ದು ಗಂಡೋ ಯಾ ಹೆಣ್ಣೊ ಎಂದು ಕೇಳಲಾಗಿ ಅಡ್ಡ ಬಂದಿದ್ದ ಕಾಲನ್ನು ಮಾತ್ರ ಗಮನಿಸಿದ್ದ ನರ್ಸಮ್ಮ 'ರೀ  ಅದೆಲ್ಲ ಗೊತ್ತಿಲ್ಲಾರಿ' ಎನ್ನಲಾಗಿ , ಸಂಜೆಯ ಲಾಸ್ಟ್ ಬಸ್ಗೆ ಮನೆಗೆ ಹೋಗುವ ಆತುರದಲ್ಲಿದ್ದ ದ್ಯಾಮ್ಯ ಬೇರೆ ಏನನ್ನು ವಿಚಾರಿಸದೇ  ಊರಿನಲ್ಲಿ ;ಹೋಯ್ ನಾವಡರಿಗೆ ಮಗು ಆಗಿತ್ತು, ಆದರೆ ಗಂಡಾ ಹೆಣ್ಣಾ ಅಂತ ಪಕ್ಕಾ ಮಾತ್ರ ಇಲ್ಲ್' ಎಂದು ಸಾರಿದ್ದನು. ಜನ್ನನ ಬಾಯಿಯಿಂದ ಈ ಆಘಾತಕಾರಿ ಸುದ್ದಿ ಕೇಳಿದ ಮನೆಯ ಜನ , ಊರ ಜನರ ನಂಬಿಕೆ ಸುಳ್ಳು ಮಾಡಲು ,   ಜನ್ನನ ಸುದ್ದಿಯಿಂದಾಗಿ ಹುಟ್ಟಿದ ತಪ್ಪು ತಿಳುವಳಿಕೆಯನ್ನುನಿವಾರಿಸಿ  ಮೊಸರು ನಾಡವ  ಪುರುಷ ಪುಂಗವ ಎಂದು ಸಾಬೀತು ಪಡಿಸಲು  ಮುಂದೆ ಹಲವಾರು ವರ್ಷಗಳ ಕಾಲ ಚಡ್ದಿಯಿಲ್ಲದೆ ಓಡಾಡುವ ಪ್ರಸಂಗ ಬಂದಿತ್ತು.  
ಹೀಗಾಗಿ ಮೊಸರುದ್ದಿನರು ತಮ್ಮ ಹುಟ್ಟಿನ ಜೊತೆ ಜೊತೆಗೆ ಸಂದೇಹವನ್ನೂ ಹುಟ್ಟು ಹಾಕಿದ ಅದಮ್ಯ ವ್ಯಕ್ತಿಯೆಂಬುದು ಗೊತ್ತಾಗುತ್ತದೆ.

*****************************************************************
ಬಕೀಟನ್ನೆ ದಿಟ್ಟಿಸುತ್ತಿದ್ದ ಇದ್ದಕ್ಕಿದ್ದಂತೆ ತಾನೂ ಒಂದು , ಬಕೀಟಾಗಿಯೂ ತನ್ನ ಸುತ್ತಲಿರುವ ಸರ್ವವೂ ಒಂದೊಂದು ಬಕೀಟಿನಂತೆಯೂ ಭಾಸವಾಗತೊಡಗಿತು. ತಾನು ಬಕಿಟಿಗಾಗಿಯೆ  , ಬಕೀಟು ಹಿಡಿಯುವದಕ್ಕಾಗಿಯೇ   ಹುಟ್ಟಿದ್ದೆನೆಂಬ  ಭಾವನಾತ್ಮಕ ಸಂಶಯ ಮೂಡಿ ಮೊಸರುದ್ದೀನತಿರುಗುತ್ತಿರುವ ನೀರನ್ನು ದಿಟ್ಟಿಸಿದ . ಆ ಕ್ಷಣದಲ್ಲಿ , ಅಖಿಲಾಂಡ ಕೋಟಿ ಬ್ರುಹ್ಮಾಂಡವನ್ನು ನಿರ್ಮಿಸಿದ ಭಗವಂತ ಸೃಷ್ಟಿ ಕಾರ್ಯವನ್ನು ಮಾಡಿದ್ದುಭೂಮಿಯೆಂಬ ಬಕೀಟಿನೊಳಗೆ  ಎನ್ನುವ ಸತ್ಯ ಹೊಳೆದು ತೀವ್ರತರನಾದ ಆನಂದಕ್ಕೆ ಈಡಾದ.  ಜೊತೆಜೊತೆಗೆ ದೇವದಾನವಾದಿಮಾನವರು , ತಾನು ಬಕೀಟಿನೊಳಗೆ ನೀರನ್ನು ತಿರುವಿದಂತೆ  ಸಮುದ್ರ ಮಥನವನ್ನುಮಾಡಿದ್ದು ಎನ್ನುವ ಕಲ್ಪನೆಯೇ ಅಳಿದುಳಿದ  ರೋಮ ರೋಮಗಳ ಅಂಚಿನಲ್ಲಿ ರೋಮಾಂಚನವನ್ನು ಉಂಟು ಮಾಡಿ , ತಾನು ಇಷ್ಟು ದಿನ ಎಲ್ಲರಿಗು , ಎಲ್ಲರೊಡನೆಯು ಹಿಡಿದ ಬಕೀಟು ಎಂಥ ಪುಣ್ಯಾ ಕಾರ್ಯವೆಂಬ ದಿವ್ಯಾ ಅನುಭವ ಪ್ರಾಪ್ತವಾಗಿ ಸುತ್ತಲೂ ದಿಟ್ಟಿಸಲಾಗಿ , ಸುತ್ತ ಹೊಳೆಯುವ ಬಕೀಟುಗಳಿಂದ ಸೃಷ್ಟಿಯಾಗಿದ್ದ ಮಾಯಲೋಕದಿಂದ , ಜಗವೆಲ್ಲವು ಬಕೀಟು ಎಂದು ತೋರಿ , ತಾನು ಸರ್ವರಿಗೂ ಬಕೀತು ಹಿಡಿಯುವ ಎನ್ನುವ ಗರ್ವಾನುಭವ ಉದ್ರೇಕಾದಿ ತಡೆಯಲಾರದ  ಪುಳಕದಿಂ ಬಚ್ಚಲು ಮನೆಯಿಂದ ಓಡಿ ಹೊರಬಂದು ಹೊಸ್ತಿಲಾಚೆ   ಚಂಗನೆ  ಜಿಗಿಯಲಾಗಿ , ಮುಂಜಾನೆ ಮನೆಯನ್ನು ಸ್ವಚ್ಚ ಮಾಡಲು ಬಂದಿದ್ದ ಮಾಯಕದ ಬಾಯಮ್ಮಳನ್ನು ಹಾಗೂ ಅವಳು ಹಿಡಿದಿರುವ  ಕೀಟು ನೋಡಿದೊಡನೆಯೇ , ಬಕೀತು ದೇವನಾದ ತನಗೆ ಬಕಿಟು ತಂದಿದ್ದ ಬಾಯಮ್ಮಳ ಅಪಾರ ಭಕ್ತಿಗೆ ಮೆಚ್ಚಿ ಉದ್ರೇಕಾತ್ಸೊಹದಿಂದ ಮೊಸರುದ್ದೀನ ಭಕ್ತೆಗೆ ವರ ಕರುಣಿಸಲು ಬಕೀಟು ಜೊತೆಗೂಡಿ ಬಾಯಮ್ಮಳನ್ನು ಸೇರಲು ತಬ್ಬಿದಾಗ , ಬಾಯಮ್ಮ ಬೆಚ್ಚಿ ಕಿಟಾರನೆ ಕಿರುಚಿ ಪೊರಕೆ ಸೇವೆ ಮಾಡಿ ಕೃಪೆಗೆ   ಪಾತ್ರಳಾದಳು.

*****************************************************************
ಹಲವಾರು ವರುಶಗಳಿಂದ ಮೊಸರುದ್ದೀನ ಬಕೀಟು ಹಿಡಿಯುತ್ತ ಸಂಗ್ರಹಿಸುತ್ತಾ ಬಕೀಟುಗಲ ಪ್ರೀತಿಸುತ್ತ ಬಂದಿದ್ದರು ಮೊದಲೆಲ್ಲ ಹೀಗೆ ಆಗುತ್ತಿರಲಿಲ್ಲ.  ಈ ಮೊದಲು ಮೊಸರುದ್ದೀನನಿಗೆಉಪಯೋಗ ವಿರುವ ಕೆಲವರು ಮಾತ್ರ ಬಕೀತಿನಂತೆ ಭಾಸವಾಗುತ್ತಿದ್ದರು ಅಥವಾ ಬಕೀಟಿನಂತೆ ಭಾಸವಾಗುವ ಕೆಲವರು ಮಾತ್ರ ಉಪಯೋಗಕ್ಕೆ ಬರುತ್ತಿದ್ದರು . ಹೀಗೆ ಭಾಸರಾದವರನ್ನು ತಬ್ಬಿ , ನೇವರಿಸಿ ಬಕೀಟು ಹಿಡಿಯುವಂತೆಯೆ ಹಿಡಿದು ಮೊಸರುದ್ದೀನ ತನ್ನ ಕೆಲಸ ಕಾರ್ಯ ಸಾಧಿಸಿ ಕೊಳ್ಳುತ್ತಿದ್ದ . ಆದರೆ ಇತ್ತೀಚಿಗೆ ಮೊಸರುದ್ದೀನನೊಳಗೆ ಬೆಳೆದ ಸಂಶಯ ನಾನಾ  ರೂಪ ತಾಳಿ ಸುತ್ತಲಿನ ಜನರೆಲ್ಲರೂ ಬಕೀಟಿನಂತೆಯೆ ಭಾಸವಾಗಿ , ಬಕೀಟುಗಳೇಲ್ಲ ಕೂಗಿ ಅಂಗಲಾಚಿ ತನ್ನಕರೆಯುತ್ತಿದ್ದಂತೆ ಅನ್ನಿಸಿ , ಅವರನ್ನು ಹಿಡಿಯಲಾಗಿ , ಜನ ಬೆಚ್ಚಿ ಬಿದ್ದು ಬಯ್ಗುಳ , ಕಪಾಲ ಮೋಕ್ಷ ಇನ್ನಿತರ ಏಟಿನ ಸೇವೆ ಮಾಡಲಾಗಿ  ಮೋಸರುದ್ದೀನ ಕಂಗಾಲಾದ .